ಆ ಕಡಲ ನೀರ

ಆ ಕಡಲ ನೀರ ಭಾವನೆಗಳ
ಅಲೆಗಳಲ್ಲಿ ನಿನ್ನ ರೂಪದರ್‍ಶನ
ಜುಳು ಜುಳು ನಾದದೊಡಲಲಿ
ನಮ್ಮ ಪ್ರೇಮಗೀತ ಗಾಯನ ||

ತಬ್ಬಿ ತರುವನ ಹಬ್ಬಿ ಬೆಳೆಯುವ
ಲತೆಯ ಮೊಗದಲಿ ಸಂಭ್ರಮ
ನನ್ನ ನಿನ್ನಾ ಬೆಸುಗೆ ಬಿಸುಪಲಿ
ಪಡೆದ ಸಂತಸ ಅನುಪಮ ||

ಬಿರಿದ ತಾವರೆ ಒಡಲ ಮಧುವಿಗೆ
ಭೃಂಗ ವೃಂದವು ನೆರೆದಿದೆ
ನಿನ್ನ ಅರಳಿದ ಮೊಗವ ನೋಡಲು
ನನ್ನ ಹೃದಯವು ಕಾದಿದೆ ||

ಪೊದೆಯ ಮರೆಯ ನವಿಲ ನಾಟ್ಯಕೆ
ವನಬನವು ಸಂಭ್ರಮಿಸಿದೆ
ನಿನ್ನ ನಡಿಗೆಯ ನಾಟ್ಯದಲಿ
ಅಂಥ ಅನುಪಮ ಚೆಲುವಿದೆ ||

ಮುಗಿಲ ಚಂದ್ರನ ಮೊಗದ ಕಾಂತಿಯು
ನಿನ್ನ ಮೊಗದಲಿ ಅರಳಿದೆ
ನಿನ್ನ ನಗುವಲ್ಲಿ ತಿಂಗಳ
ಬೆಳಕು ಧಾರೆಯು ಹರಿದಿದೆ ||

ನಗುವ ಹೂವದು ಬಳ್ಳಿ ಬಳುಕ
ಉಲಿವ ಕೋಗಿಲೆ ಕೊರಳಲಿ
ನಿನ್ನ ರೂಪಿದೆ ನಿನ್ನ ದನಿಯಿದೆ
ಎನ್ನ ಕೂಗಿ ಕರೆದಿದೆ ||

ನನ್ನ ಪ್ರೀತಿಸಿ ನನ್ನ ಕಾಡಿಸಿ
ನನ್ನ ಹೃದಯವ ತಣಿಸಿ
ಎಲ್ಲಿ ಹೋದೆ ಕಾಯುತಿರುವೆ
ನಿನಗಾಗಿ ಕಾದಿರುವ ಗೆಳೆಯ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾವಿರ ವರ್ಷದ ಕನ್ನಡ ಸಾಹಿತ್ಯ
Next post ರಹದಾರಿ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

cheap jordans|wholesale air max|wholesale jordans|wholesale jewelry|wholesale jerseys